'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

ಸುಭಾಷಿತಗಳು



1. ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.------ ಕುವೆಂಪು
2. ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ;ಆದರೆ ಆತನ ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ. ----- ಅಬ್ರಹಾಂ ಲಿಂಕನ್.
3. ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ. ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ. ----- ಸರ್ವಜ್ಞ.
4. ಗುಣಾತ್ಮಕವಾಗಿ ಯೋಚಿಸುವುದಿಲ್ಲ ಎಂದಾದಲ್ಲಿ ನೀವು ಕನಿಷ್ಠ ಪಕ್ಷ ಸುಮ್ಮನಾದರೂ ಇರಿ.----- ಜೋಯೆಲ್ ಆಸ್ಟಿನ್ .
5. ಜಾತಿಯನ್ನು ಕೇಳಬೇಡಿ , ಹೇಳಬೇಡಿ ಮತ್ತು ಅದರ ಬಗ್ಗೆ ಚಿಂತಿಸಲೂಬೇಡಿ.---- ನಾರಾಯಣ ಗುರು.
6. ಪ್ರೀತಿಯಲ್ಲಿ ಬೀಳುವುದಕ್ಕೆ ಗುರುತ್ವಾಕರ್ಷಣ ಶಕ್ತಿಯನ್ನು ಬೈದು ಪ್ರಯೋಜನವಿಲ್ಲ. ಅದೊಂದು ಜೈವಿಕ ಕ್ರಿಯೆ; ಭೌತ ಮತ್ತು ರಸಾಯನಶಾಸ್ತ್ರಕ್ಕೆ ಅಲ್ಲಿ ಸ್ಥಳವಿಲ್ಲ.----- ಆಲ್ಬರ್ಟ್ ಐನ್ ಸ್ಟೀನ್
7. ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ.-----ತ.ರಾ.ಸು.
8. ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ; ಲೋಕ ಧರ್ಮದ ಹಿತಕ್ಕಾಗಿ ಅಲ್ಲ. -----ಡಿ.ವಿ.ಜಿ.
9. ಮೌನ ಅನಂತದಷ್ಟು ಆಳವಾದದ್ದು.ಮಾತು ಕಾಲದಷ್ಟು ಕ್ಷಣಿಕ. ---- ಥಾಮಸ್ ಕಾರ್ಲೈಲ್.
10. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ಸರ್.ಫಿಲಿಪ್ ಸಿಡ್ನಿ.
11. ಕ್ಷಮಿಸುವುದು ಉತ್ತಮ. ಮರೆತುಬಿಡುವುದು ಸರ್ವೋತ್ತಮ. ------ ರಾಬರ್ಟ್ ಬ್ರೌನಿಂಗ್ .
12. ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. -----ಪಿ.ಸೈರಸ್.
13. ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು.ಕಾಲನ್ನೆಳೆಯುತ್ತಾ ನಡೆಯಬೇಡ.----ಎ.ಪಿ.ಜೆ.ಅಬ್ದುಲ್ ಕಲಾಂ.
14. ಜಗತ್ತಿನಲ್ಲಿ ಹೇಳುವವರಿಗಿಂತ , ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.----- ಗಳಗನಾಥ.
15. ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.------ ಶಿವರಾಮ ಕಾರಂತ.
16. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. -----ಕುವೆಂಪು.
17. ಸತ್ಯವನ್ನು ಹೇಳುವವನು , ಸ್ವಾರ್ಥವನ್ನು ಗೆದ್ದವನು ನಿಜವಾದ ಸುಖಿ.----- ಬುದ್ಧ.
18. ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , ಅವಕಾಶವೆಂಬ ತಂದೆಗೆ ಜನಿಸುವ ಮಗು.-----ಗುರುನಾನಕ್.
19. ರೂಪ ಕಣ್ಣುಗಳಿಗೆ ಸೀಮಿತ.ಗುಣ , ಆತ್ಮದವರೆಗೆ ತಲುಪುವ ಸಾಧನ.-----ತ್ರಿವೇಣಿ.
20. ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತಾ ನಾಶಪಡಿಸು.---- ಸ್ವಾಮಿ ವಿವೇಕಾನಂದ.
21. ತಾನು ಎಲ್ಲವನ್ನೂ ಬಲ್ಲೆನೆಂದು ತಿಳಿಯುವವನೆ ಮೂರ್ಖ. ----- ಮಹಾಭಾರತ.
22. ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ.----ರಂ.ಶ್ರೀ.ಮುಗಳಿ.
23. ಹಣಕ್ಕೆ ಕೈ , ಕಾಲುಗಳಿದ್ದಂತೆ ಉಪಯೋಗಿಸಿ, ಇಲ್ಲವೇ ಕಳೆದುಕೊಳ್ಳಿ.-----ಹೆನ್ರಿ ಫೋರ್ಡ್.
24. ಬಂಧಿತನಾದ ದೇವರೇ ಮನುಷ್ಯ ; ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು. ----- ರಾಮಕೃಷ್ಣ ಪರಮಹಂಸ.
25. ಸಾಯುವುದು ಸುಲಭ, ಬಾಳುವುದು ದೊಡ್ಡ ಹೊಣೆಗಾರಿಕೆ. ---- ಎಸ್. ವಿ.ರಂಗಣ್ಣ.
26. ನಮ್ಮ ಗುಣಗಳ ನೆರಳೇ ನಮ್ಮ ಲೋಕಗಳು.----- ಎಮರ್ ಸನ್.
27. ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ. ----- ಮಹಾತ್ಮಾ ಗಾಂಧಿ.
28. ನಿರ್ಭಯವೂ ನಿಷ್ಪಕ್ಷಪಾತವೂ ಆದ ಜಗತ್ತಿನ ಅನ್ವೇಷಣೆಯೇ ವಿಜ್ಞಾನ. ----' ಸಿ.ವಿ.ರಾಮನ್.
29. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ತಾವೇ ಕಂಡುಕೊಳ್ಳಬೇಕು.ಧರ್ಮದ ದಾರಿ ಒಂದಲ್ಲ,ಹಲವು.----- ಕೆ.ಎಂ. ಮುನ್ಷಿ.
30. ನಮ್ಮ ಧರ್ಮಗಳು ನಮಗೆ ಕೂಡಿ ಬಾಳಲು ಕಲಿಸದೇ ಇದ್ದರೆ ಆ ಧರ್ಮಗಳು ಏಕೆ.? ---- ಸಿದ್ಧೇಶ್ವರ ಸ್ವಾಮಿಜಿ.
31. ಲೋಕವೆಂಬುದೊಂದು ಸಂತೆ, ಬೇಕು ಬೇಡಗಳ ಕಂತೆ, ಸಾಕು ನಮಗಾ ಚಿಂತೆ.----- ಡಿ.ವಿ.ಗುಂಡಪ್ಪ.
32. ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದು:ಖಿಯೂ ಅಲ್ಲ. ---- ಗೌತಮ ಬುದ್ಧ.
33. ನಿಮ್ಮ ಮುಖವನ್ನು ಯಾವತ್ತೂ ಸೂರ್ಯನಿಗೆ ಅಭಿಮುಖವಾಗಿಟ್ಟು ಕೊಳ್ಳಿ.ನೆರಳು ಹಿಂದಕ್ಕೆ ಸರಿಯುತ್ತದೆ.----- ವಾಲ್ಟ್ ವಿಟ್ಮನ್.
34. ಮಹಾ ಕಾರ್ಯಗಳು ಮಹಾ ತ್ಯಾಗದಿಂದ ಮಾತ್ರ ಸಾಧ್ಯ. ----- ಸ್ವಾಮಿ ವಿವೇಕಾನಂದ.
35. ಶ್ರಮಜೀವಿಯಂತೆ ಕೆಲಸ ಮಾಡು .ವೇದಾಂತಿಯಂತೆ ಯೋಚಿಸು.------- ಹೆನ್ರಿ ಬರ್ಗ್.
36. ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.------ ಸ್ವಾಮಿ ವಿವೇಕಾನಂದ.
37. ಸುಖದಲ್ಲೂ ಭಯ , ಅಪಾಯ ಇದೆ. ಕಷ್ಟದಲ್ಲೂ ಹಿತ , ಭರವಸೆ ಇದೆ. ----- ಫ್ರಾನ್ಸಿಸ್ ಬೇಕನ್.
38. ಹೊಗಳಿಕೆಯ ಮಾಲಿನ್ಯವನ್ನು ತೊಡೆದು ಹಾಕಲು ಏಕಮಾತ್ರ ಉಪಾಯ: ಕೆಲಸ ಮತ್ತು ಇನ್ನಷ್ಟು ಕೆಲಸ. ------ಆಲ್ಬರ್ಟ್ ಐನ್ ಸ್ಟೀನ್.
39. "ನಮ್ಮನ್ನು ಪ್ರೀತಿಸುವವರಿದ್ದಾರೆ" ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ.----- ವಿಕ್ಟರ್ ಹ್ಯೂಗೊ.
40. ತಿಳಿದವಗೆ ಜಗವೆಲ್ಲ ರಸದ ಊಟ.---- ಜಿ.ಎಸ್.ಶಿವರುದ್ರಪ್ಪ.
41. ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು , ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ ! ---- ಡಿ.ವಿ.ಜಿ.
42. ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ. ------ಪ.ಸೈರಸ್.
43. ಸುಖ, ಸ್ನೇಹಿತರನ್ನು ಕರೆತರುತ್ತದೆ.ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.------ಪಿ.ಸೈರಸ್.
44. ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು.----- ರವೀಂದ್ರನಾಥ್ ಟ್ಯಾಗೋರ್.
45. ಯಾವ ಸರ್ಕಾರಕ್ಕೆ ಜನರನ್ನು ಸುಖಿಗಳನ್ನಾಗಿಸಬೇಕೆಂಬ ಅಪೇಕ್ಷೆ ಇದೆಯೋ, ಯಾವ ಸರ್ಕಾರಕ್ಕೆ ಅದನ್ನು ಸಾಧಿಸುವ ರೀತಿ ತಿಳಿದಿದೆಯೋ ಅದೇ ಶ್ರೇಷ್ಠ ಸರ್ಕಾರ. -----ಮೆಕಾಲೆ.
46. ಭಾಗ್ಯವಿರಬಹುದು, ಬೇಕಾದವರು ಇರಬಹುದು , ಫಲ ಮಾತ್ರ ಪಡೆದಷ್ಟೇ.----- ಎ.ಆರ್.ಕೃಷ್ಣ ಶಾಸ್ತ್ರಿ.
47. ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ.---- ಸಾಕ್ರೆಟಿಸ್.
48. ಸುಖವನ್ನು ಸಹಿಸುವ ಶಕ್ತಿ ಒಬ್ಬನಿಗಿದ್ದರೆ ದುಃಖವನ್ನು ಸಹಿಸುವ ಶಕ್ತಿ ನೂರಾರು ಮಂದಿಗಿರುತ್ತದೆ.----- ಥಾಮಸ್ ಕಾರ್ಲೈಲ್.
49. ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ.------- ಇಂಗರ್ ಸಾಲ್.

50. ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. ------ಮಹಾತ್ಮಾ ಗಾಂಧಿ.  

  1. ಬುಧಿವಂತರಾದವರು ಹಿಂಜರಿಯದೆ ಹತ್ತಿರ ಹೋಗಿ ಆಪ್ತನಾದವನು ಸೇರಬೆಕು
  2. ಕೆಟ್ಟದ್ದನು ನುಡಿವವರನ್ನು ಉಪಾಯವಾಗಿ ತೊರೆಯುವುದು ವಿವೇಕ
  3. ದುರಳರೊಂದಿಗೆ ಸ್ನೇಹವನ್ನು ಬಿಡು , ಉತ್ತಮರ ಹಿತವಾದಗಳನ್ನು ನೆನಪಿನಲ್ಲಿಟ್ಟುಕೊಂಡಿರು
  4. ವಿದ್ಯೆಗಿಂತ ಬೇರೆ ಐಶ್ವರ್ಯವಿಲ್ಲ , ನಿರ್ಮಲ ಸ್ವಭಾವಕಿಂತ ಬೇರೆ ತೀರ್ಥ ಸ್ನಾನವಿಲ್ಲ
  5. ನುಡಿದಂತೆ ನಡೆದುಕೊಳ್ಳದವನು ಶ್ರೇಷ್ಠನಾಗಲು ಸಾಧ್ಯವೆ ಇಲ್ಲ
  6. ಶ್ರದ್ಧೆಯೆ ಯೆಶಸ್ಸಿನ ಕೀಲಿ ಕೈ
  7. ಆದರ್ಶಗಳಿಗಾಗಿ ಬದುಕುವ ಬದುಕು ಒಂದು ತಪಸ್ಸೇ ಸರಿ
  8. ಪ್ರತಿಭೆ , ಶ್ರಮ ಮತ್ತು ಸ್ವಲ್ಪ ಅದೃಷ್ಟ ಇವುಗಳ ಮಿಶ್ರಣವೇ ಯೆಶಸ್ಸು.
  9. ಸಂಸ್ಕೃತಿಯೇ ಮಾನವನ ಮಹಾಗುರು
  10. ಜೀವನದ ಹಾದಿಯಲ್ಲಿ ಕಷ್ಟಗಳೆಂಬ ಉಬ್ಬುಗಳಿದ್ದರೂ ಸುಖವೆಂಬ ಇಳಿಜಾರುಗಳೂ ಇರುತ್ತವೆ
  11. ಧೈರ್ಯಶಾಲಿಗೆ ಮಾತ್ರ ವಿಜಯಲಕ್ಶ್ಮಿ ಒಲೆಯುತ್ತಾಳೆ , ಹೇಡಿಗಳಿಗಲ್ಲ
  12. ಹುಲಿಗೆ ಹುಲ್ಲು ತಿನ್ನುವುದನ್ನು ಕಲಿಸಬಹುದು , ಮುರ್ಖನಿಗೆ ನೀತಿಯನ್ನು ಕಲಿಸುವುದು ಕಷ್ಟ ಸಾಧ್ಯ
  13. ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ ಚಂಡಮಾರುತದಿಂದಲೂ ಫಾರಾಗಿಸಬಲ್ಲದು
  14. ನೀವು ಹುಟ್ಟುವಾಗ ಏನನ್ನೂ ತರುವುದಿಲ್ಲವಾದುದರಿಂದ ನಂತರ ಪಡೆದಿದ್ದೆಲ್ಲ ಲಾಭವೇ
  15. ಸೋಲು ಎಂಬುದು ಮತ್ತೊಮ್ಮೆ ಹೆಚ್ಚು ಚೈತನ್ಯದಿಂದ ಯತ್ನಿಸಲು ನೀಡಲ್ಪಡುವ ಒಂದು ಅವಕಾಶ
  16. ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ , ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ 
  17. ಸೋಲಾದಾಗ ಎಲ್ಲರೂ ನಿನ್ನನು ನಿಂದಿಸಿದರೂ 
    ನೀನು ನಗುತ್ತಿದ್ದರೆ 
    ಎಲ್ಲರೂ ತಮ್ಮ ಆತ್ಮವಿಶ್ವಾಸವನ್ನು ಶಂಕಿಸುತ್ತಿರುವಾಗ 
    ನೀನು ನಿನ್ನನೇ ನಂಬುತ್ತಿದ್ದರೆ 
    ಅರಸರಲ್ಲಿಯೂ ಆಳುಗಳ ಮಧ್ಯೆಯೂ 
    ನೀನು ನಿನ್ನ ತಲೆಯನ್ನು ಅತ್ಮವಿಶ್ವಸದಿಂದ ಎತ್ತಿದ್ದರೆ 
    ಈ ಜಗತ್ತೇ ನಿನ್ನದಾಗುತ್ತದೆ 
    ಅಂತವನೇ  ನಿಜವಾದ ಮಾನವ 
    ಉಳಿದವರೆಲ್ಲರೂ ಠೊಳ್ಳು ಮಾನವರು

    - ರುಡ್ಯಾರ್ಡ್ ಕ್ಲಿಪ್ಲಿಂಗ್ - ಅನುವಾದ

    **********************


    18.ಶಾಂತ ರೀತಿಯಿಂದ ಕುತಗೊಂಡು ಓದ್ರಿ..
    ****ನುಡಿಮುತ್ತುಗಳು****

    ನೀರಿಗಿಂತ ತಿಳಿಯಾದದ್ದು ; ಜ್ಞಾನ 
    ಭೂಮಿಗಿಂತ ಭಾರವಾದದ್ದು ; ಪಾಪ
    ಕಾಡಿಗಿಂತ ಕಪ್ಪಾಗಿರುವುದು ; ಕಳಂಕ
    ಸೂರ್ಯನಿಗಿಂತ ಪ್ರಕರವಾದದ್ದು ; ಕೋಪ
    ಮಂಜಿಗಿಂತ ಹಗುರವಾದದ್ದು ; ಪುಣ್ಯ
    ಗಾಳಿಗಿಂತ ವೇಗವಾಗಿರುವುದು ; ಮನಸ್ಸು

    **********************************

    19.ಯಾರನ್ನಾದರೂ ಮರೆಯುವುದಾದರೆ ಮರೆತುಬಿಡಿ, ಆದರೆ!
    ಯಾರನ್ನು ಮರೆತಿದ್ದೇವೆ ಎಂಬುವುದನ್ನು ನೆನಪಿಟ್ಟುಕೊಳ್ಳಿ.

    **********************************

    20.ದೊಡ್ಡವರಾಗಲು ದಡ್ಡರಾಗಲು ವಯಸ್ಸಿನ ಅಂತರವಿರದು.

    **********************************

    21.ತಾನಾಗಿ ಬರುವುದು; ತಾರುಣ್ಯ, ಮುಪ್ಪು
    ಜೊತೆಯಲ್ಲೇ ಬರುವುದು; ಪಾಪ, ಪುಣ್ಯ
    ತಡೆಯಿಲ್ಲದೆ ಬರುವುದು; ಆಸೆ, ದುಃಖ
    ಅನಿವಾರ್ಯವಾಗಿ ಬರುವುದು; ಹಸಿವು, ದಾಹ
    ನಾಶಕ್ಕಾಗಿ ಬರುವುದು; ದ್ವೇಷ, ಸಿಟ್ಟು
    ಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು

    **********************************

    22.ಓಡಲು ಸಾಧ್ಯವಾಗದಿದ್ದಲ್ಲಿ
    ನಿಧಾನವಾಗಿ ನೆಡೆದರೂ
    ಗುರಿ ಮುಟ್ಟಬಹುದು
    ಆದರೆ ಹಿಂದಿರುಗಬೇಡಿ.

    **********************************

    23.ನೀವು ನಿನ್ನೆಗಿಂತ ಈ ದಿನವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳದಿದ್ದರೆ
    ನಿಮಗೆ ನಾಳೆ ಏಕೆ ಬೇಕು?

    -ಅನುಭವದ ನುಡಿಗಳು

    **********************************

    24.ಪಾಪವನ್ನು ತಿರಸ್ಕರಿಸು, ಪಾಪಿಯನ್ನಲ್ಲ

    -ಟಿ.ಪಿ.ಕೈಲಾಸಂ

    **********************************

    25.ಶೂದ್ರರಿಗೆ ಆದ ಅನ್ಯಾಯವನ್ನು ಸರಿಪಡಿಸಲು
    ಹೋರಾಡುವವರು ಬ್ರಾಹ್ಮಣರ ವಿರುದ್ಧ ಅನಗತ್ಯವಾಗಿ 
    ಬರೆಯಬೇಕಿಲ್ಲ,
    ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕು.

    -ಕುವೆಂಪು

    **********************************

    23.ನಮಗೆ ಅವಶ್ಯಕತೆ ಇಲ್ಲದುದನ್ನು ಪಡೆದಿದ್ದರೂ ಕಳ್ಳತನ ಮಾಡಿದಂತೆ.

    -ಮಹಾತ್ಮ ಗಾಂಧೀಜಿ

    **********************************

    24.ಬೆಳಕು ಎಲ್ಲಿಂದ ಬಂದರೂ ಅದಕ್ಕೆ ಸ್ವಾಗತ.

    -ಮಹಾತ್ಮ ಗಾಂಧೀಜಿ

    **********************************

    25.ಜಿಪುಣ ಮತ್ತು ಉದಾರಿ ಇವರಿಬ್ಬರಿಗೂ ತಾನು ಅನುಭವಿಸಬೇಕು ಎಂಬ ಇಚ್ಛೆ ಇಲ್ಲ;
    ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣ ಕೂಡಿಡುತ್ತಾರೆ!
    ಆದರೂ ಇಬ್ಬರಲ್ಲೂ ಇರುವ ವ್ಯತ್ಯಾಸ ಅಪಾರ.

    -ಸುಭಾಷಿತ ಸುಧಾನಿಧಿ

    **********************************

    26.ಗಾಳಿ ಬೀಸುತ್ತಿರುವಾಗ ನೀರು ಅಲೆಗಳಿಂದ ಒಂದು ಕ್ಷಣವೂ ನಿಶ್ಚಲವಾಗಿರುವುದಿಲ್ಲ.
    ಮನಸ್ಸೂ ಹಾಗೆಯೇ, ಆದ್ದರಿಂದ ಅದನ್ನು ನಂಬಬಾರದು!

    -ದಕ್ಷ ಸ್ಮೃತಿ

    **********************************

    27.ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆ ಮೇಲೆ!

    -ಬೀಚಿ

    **********************************

    28.ಸತ್ಯವನ್ನೇ ಹೇಳು; ನಂತರ ತಕ್ಷಣ ಸ್ಥಳ ಬಿಡು!

    -ಯುಗೋಸ್ಲಾವಿಯಾ ಗಾದೆ

    **********************************

    29.ಯಾರು ಈ ಲೋಕದಲ್ಲಿ ಅತ್ಯಂತ ಮೂಢರೋ, ಯಾರು ಅತ್ಯಂತ ಬುದ್ಧಿಶಾಲಿಗಳೋ - 
    ಅವರೇ ಸುಖವಾಗಿರುವವರು. 
    ಮಧ್ಯಮ ವರ್ಗದವರು ಕ್ಲೇಶ ಪಡುತ್ತಾರೆ.

    -ರಾಮಾಯಣ

    **********************************

    30.ಕುರುಡನ ಹೆಗಲ ಮೇಲೆ ಹೆಳವ(ಕುಂಟ) ಕುಳಿತು ಒಂದು ಗಾವುದ ದೂರ ನೆಡೆದ ಮಾತ್ರಕ್ಕೆ,
    ಅದು ಒಬ್ಬ ಬಲಿಷ್ಠನು ದಾರಿ ನಡೆದಂತೆ ಆದೀತೇ?

    -ಹರಿಹರ

    **********************************

    31.ಎಲ್ಲರ ಆಸೆಗಳನ್ನೂ ಪೂರೈಸುವ ತಾಕತ್ತು ನಮ್ಮ ನಿಸರ್ಗಕ್ಕಿದೆ, ಎಲ್ಲರ ದುರಾಸೆಗಳನ್ನಲ್ಲ.

    -ಮಹಾತ್ಮ ಗಾಂಧೀಜಿ  




                     ಸುಭಾಷಿತಗಳು




1. ಆದರ್ಶ ಗೃಹಸ್ಥನಾಗುವುದು , ಆದರ್ಶ ಸನ್ಯಾಸಿಯಾಗುವುದಕ್ಕಿಂತ ಬಹಳ ಕಷ್ಟ. ---- ಸ್ವಾಮಿ ವಿವೇಕಾನಂದ.
2. ಕಷ್ಟಗಳು ಹೆಚ್ಚಾದಂತೆ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತದೆ. -----ಎಮರ್ಸನ್.
3. ಪ್ರೀತಿಯಿಂದಾಡಿದ ಪ್ರತಿಯೊಂದು ನುಡಿಯು ಸಿಡಿಲಿನಂತೆ ಪರಿಣಾಮಕಾರಿ. -------ಸ್ವಾಮಿ ವಿವೇಕಾನಂದ.
4. ಗಟ್ಟಿ ಯಾವುದು , ಜಳ್ಳು ಯಾವುದು ಎಂಬುದನ್ನು ತಿಳಿದು ಶಾಶ್ವತವಾದ ಸತ್ಯವನ್ನು ಹುಡುಕುವುದು ನಮ್ಮ ಧರ್ಮವಾಗಬೇಕು.-----.ಬಿ.ಎಂ.ಶ್ರೀ.
5. ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು. ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ----- ವಿನೋಬಾ ಭಾವೆ.
6. ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು , ತೂಗುವುದು , ಅಳೆಯುವುದು.---- ಗೋಪಾಲಕೃಷ್ಣ ಅಡಿಗ.
7. ನಿಮ್ಮಷ್ಟಕ್ಕೆ ನೀವೇ ಬೆಳೆಯಬೇಕು.ಅದಕ್ಕಾಗಿ ಬೇರೊಬ್ಬ ಶಿಕ್ಷಕನಿರುವುದಿಲ್ಲ.------ ಸ್ವಾಮಿ ವಿವೇಕಾನಂದ.
8. ಕಲಿಕೆ ವಿಷಯ ಬರೀ ತಿಳುವಳಿಕೆಯ ಮಟ್ಟದಲ್ಲಿ ಉಳಿಯದೆ ಹೆಚ್ಚು ಅರ್ಥಪೂರ್ಣ ಮಾಡಬಲ್ಲ ಮನುಷ್ಯನೊಬ್ಬ ಬೇಕು. ಆತನೇ ಕೋಚ್ ಅಥವಾ ಗುರು. ------ ಪಿ. ಲಂಕೇಶ್.
9. ಅನ್ಯರನ್ನು ಆಳು ಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.----- ದ.ರಾ.ಬೇಂದ್ರೆ.
10. ಬಾಳುವಷ್ಟು ಕಾಲವೂ ಕಲಿಯುತ್ತಲೇ ಇರಬೇಕು.----- ತೀ.ನಂ.ಶ್ರೀ.
11. ನಾವು ಬಿಡುಗಡೆ, ಸ್ವಾತಂತ್ರ್ಯ ಪಡೆಯಬೇಕಾದದ್ದು ಅಜ್ಞಾನದಿಂದ, ಅಧರ್ಮದಿಂದ.---'.ಬಿ.ಎಂ.ಶ್ರೀ.
12. ನಮ್ಮ ಹಕ್ಕುಗಳಿಗಾಗಿ ಹೋರಾಡಲು ಎಲ್ಲಿ ಅವಕಾಶ ಇದೆಯೋ ಅಲ್ಲಿ ಪ್ರಜಾಪ್ರಭುತ್ವ ಇದೆ ಎಂದೇ ಅರ್ಥ. ------ ರೋಜರ್ ನಾಶ್ ಬಾಲ್ಡಿವಿನ್.
13. ಕರುಣೆ ಹೃದಯದ ಅಂತರಾಳದಿಂದ ಬರಬೇಕು. ಅದೇ ನಿಜವಾದ ಕರುಣೆ.-------ಮಹಾತ್ಮಾ ಗಾಂಧಿ.
14. ದೈವ ಸಹಾಯವಿಲ್ಲದೆ ಜಯವಿಲ್ಲ. ಸ್ವಪ್ರಯತ್ನವಿಲ್ಲದೆ ದೈವ ಸಹಾಯವೂ ಇಲ್ಲ.----- ಡಿ.ವಿ.ಜಿ.
15. ಕೆಟ್ಟದ್ದನ್ನು ಮಾಡಲೇಬೇಕೆಂದವನಿಗೆ ಅವಕಾಶದ ಕೊರತೆ ಇರದು.-------ಪಿ.ಸೈರಸ್
16. ಇನ್ನಬ್ಬರ ದುಃಖದಲ್ಲಿ ಸಂತೋಷ ಕಾಣಬೇಡ.------ಪಿ.ಸೈರಸ್.
17. ನಮ್ಮ ಹೆಚ್ಚಿನ ದುಃಖ, ಸಂಕಟಗಳಿಗೆ ನಾವೇ ಕಾರಣ.------ಸಾಫೋಕ್ಲಿಸ್.
18. ಧೈರ್ಯ ಅಂದರೆ ಭಯ ಇಲ್ಲದಿರುವುದಲ್ಲ, ಭಯದ ಮೇಲೆ ಜಯ ಸಾಧಿಸುವುದು.---- ನೆಲ್ಸನ್ ಮಂಡೇಲಾ.
19. ಮತ್ತೆ ಮತ್ತೆ ಯಾವ ಪುಸ್ತಕ ಓದುತ್ತೇವೆಯೋ ಅದು ಉತ್ತಮವಾದ ಪುಸ್ತಕ. ---------ಜಾನ್ ರಸ್ಕಿನ್.
20. ನಾವು ಮಾಡಿದ ಅಲ್ಪ ಸಾಧನೆ , ಮಾಡಬೇಕಾದ ಬೃಹತ್ ಕಾರ್ಯಕ್ಕೆ ನಮ್ಮನ್ನು ಕುರುಡಾಗಿಸಬಾರದು.-----ಎಸ್ . ರಾಧಾಕೃಷ್ಣನ್.
21. ಪ್ರೀತಿಯು ಒಡೆತನವನ್ನು ಪ್ರತಿಪಾದಿಸುವುದಿಲ್ಲ. ಸ್ವಾತಂತ್ರ್ಯವನ್ನು ನೀಡುತ್ತದೆ. ------- ರವೀಂದ್ರನಾಥ್ ಟ್ಯಾಗೋರ್.
22. ಭಕ್ತಿ ಒಳ್ಳೆಯ ಮಾತುಗಳನ್ನಾಡಿಸಿದರೆ ಸಾಲದು.ಅದು ಒಳ್ಳೆಯ ಕೆಲಸಗಳನ್ನು ಮಾಡಿಸಬೇಕು. ------ಡಿ.ವಿ.ಜಿ.
23. ದುಡಿಮೆಯು ಅತ್ಯಂತ ಹೆಚ್ಚು ಬೆಲೆಬಾಳುವ ಬಂಡವಾಳ. -------ಕಾರ್ಲ್ ಮಾರ್ಕ್ಸ್.
24. ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿನಿಂದ ಬೆಳೆಯುವುದಕ್ಕಾಗಿ .--------ಶಿವರಾಮ ಕಾರಂತ.
25. ಧನವಿದ್ದವರೇ ಧನಿಕರಲ್ಲ, ಜ್ಞಾನವೇ ಧನದ ನಿಧಿ.------ಪಂಡಿತ ತಾರಾನಾಥ.
26. ವಿವೇಕಿಯಾದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ.

No comments:

Post a Comment